Parihara Payment : ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಖಾರಿಫ್ (Kharif) ಹಂಗಾಮಿನ ಬೆಳೆ ಪರಿಹಾರದ ಹಣ! ಮೊಬೈಲ್ ನಲ್ಲಿ ಚೆಕ್ ಮಾಡಿ!

Parihara Payment

ಪ್ರಕೃತಿ ವಿಕೋಪ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜ್ಯದ ರೈತರಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ಕೊಟ್ಟಿಸುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Parihara Payment For Farmers Kharif Crop Amount


ಹಾಗೆ 2025- 26ನೇ ಸಾಲಿನ ಖಾರಿಫ್ (kharif) ಹಂಗಾಮಿನ ಬೆಳೆ ವಿಮೆ ಪರಿಹಾರದ ಮತ್ತವು ಹಂತ ಹಂತವಾಗಿ ನೆನ್ನೆವರೆಗೂ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿತ್ತು ಇಂದು ಈ ವರ್ಗಾವಣೆ ಸಂಪೂರ್ಣವಾಗಿ ನಿಂತಿದೆ ಆದರೆ ಸುಮಾರು 2000 ರೈತರ ಬ್ಯಾಂಕ್ ಖಾತೆಗೆ (Parihara Payment)ಈ ಸಾಲಿನ ಹಣ ವರ್ಗಾವಣೆಯಾಗಿಲ್ಲ. ನಮ್ಮ ಅಕ್ಕ-ಪಕ್ಕದ ಮನೆ ರೈತರಿಗೆ ಬೆಳೆ ಪರಿಹಾರದ ಹಣ ಖಾತೆಗೆ ವರ್ಗಾವಣೆ ಆಗಿದೆ ಆದರೆ ನಮ್ಮ ಪರಿಹಾರದ ಹಣ ವರ್ಗಾವಣೆ ಆಗಿಲ್ಲ ಎನ್ನುವ ಮಾಹಿತಿ ರೈತರನ್ನ ಆತಂಕಕ್ಕೆ ಕಾರಣವಾಗಿದೆ.

ರೈತ ಮಿತ್ರರು ಸರ್ಕಾರದ ಘೋಷಣೆಯನ್ನೇ ನಂಬಿ ಇದುವರೆಗೂ ಕಾಯುತ್ತಿದ್ದರು, ಈಗ ಹಣ ಬಾರದಿರುವುದರಿಂದ ಸಾಲ, ಗೊಬ್ಬರ, ಬೀಜ ಹಾಗೂ ಕುಟುಂಬದ ಖರ್ಚನ್ನ ಹೇಗೆ ನಿಭಾಯಿಸಬೇಕು ಎಂಬ ಚಿಂತೆ ಮತ್ತೆ ಅವರನ್ನು ಕಾಡುತ್ತಿದೆ. ಇದು ನಮ್ಮ ತಪ್ಪೇ ? ಎಂಬ ಪ್ರಶ್ನೆ ರೈತರ ಮನಸ್ಸಲ್ಲಿ ಮೂಡುತ್ತಿದೆ.

ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಖಾರಿಫ್ (Kharif) ಹಂಗಾಮಿನ ಬೆಳೆ ಪರಿಹಾರದ ಹಣ!

“ಹಣ ವರ್ಗಾವಣೆ ಏಕೆ ನಿಂತಿದೆ? ತಾಂತ್ರಿಕ ಸಮಸ್ಯೆಯೇ? ದಾಖಲೆಗಳ ಗೊಂದಲವೇ? ಅಥವಾ ಆಡಳಿತಾತ್ಮಕ ವಿಳಂಬವೇ? ಎಂಬುದರ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟ ಉತ್ತರ ಇಂದು ಸುದ್ದಿ ಗೋಷ್ಠಿಯಲ್ಲಿ ಹೊರ ಬಿದ್ದಿದೆ”. ಈ ವಿಷಯವಾಗಿ ರೈತರ ಆತಂಕ ಮಾಡಿಕೊಳ್ಳುವುದು ಬೇಡ.

ರಾಜ್ಯದ ಅನ್ನದಾತರಿಗೆ ನ್ಯಾಯ ದೊರಕಲೇಬೇಕು. ಬಾಕಿ ಉಳಿದಿರುವ ಎಲ್ಲಾ ರೈತರಿಗೂ ತಕ್ಷಣವೇ ಬೆಳೆ ವಿಮೆ ಪರಿಹಾರದ ಹಣವನ್ನು (Parihara Payment)ಬಿಡುಗಡೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರೈತರ ನೋವಿಗೆ ಶೀಘ್ರ ಪರಿಹಾರ ಹಣ ರೈತರ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಖಾರಿಫ್ (kharif) ಹಂಗಾಮಿನ ಬೆಳೆ ಪರಿಹಾರದ ಮೊತ್ತದ ವಿಮರ್ಶೆ :-

ವಿಷಯಸ್ಥಿತಿ / ಮಾಹಿತಿವಿಮರ್ಶೆ / ಟಿಪ್ಪಣಿ
ಪ್ರಕೃತಿ ನಷ್ಟಅತಿವೃಷ್ಟಿ / ಅನಾವೃಷ್ಟಿಯಿಂದ ಬೆಳೆ ನಷ್ಟರೈತರ ಸಾಲ, ಕುಟುಂಬ ಖರ್ಚು, ಬಾಳಿಕೆ ಮೇಲೆ ನೇರ ಪ್ರಭಾವ
ಹಣ ವರ್ಗಾವಣೆ ಸ್ಥಿತಿ2025–26ನೇ ಸಾಲಿನ ಖಾರಿಫ್ ಬೆಳೆ ವಿಮೆ ಹಣ ಹಂತ ಹಂತವಾಗಿ ಬಾಕಿ ಉಳಿದ ರೈತರಿಗೆ ಬಂದಿಲ್ಲ2000 ರೈತರು ಇನ್ನೂ ಹಣ ಪಡೆದಿಲ್ಲ, ಕೇವಲ ತಾತ್ಕಾಲಿಕ ವಿಳಂಬ; ಹಣ ರದ್ದು ಆಗಿಲ್ಲ
ಸರ್ಕಾರದ ಭರವಸೆಎಲ್ಲಾ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಖಂಡಿತತಾಂತ್ರಿಕ/ಆಡಳಿತಾತ್ಮಕ ಕಾರಣಗಳಿಂದ ವಿಳಂಬ; ಶೀಘ್ರದಲ್ಲಿ ಪುನರಾರಂಭ
ರೈತರ ಕ್ರಮಗಳು1. ಬ್ಯಾಂಕ್ ಖಾತೆ, IFSC, ಆಧಾರ್, ಅರ್ಜಿ ಪರಿಶೀಲನೆ2. ಬ್ಯಾಂಕ್ / ಕೃಷಿ ಕಚೇರಿ ಭೇಟಿ3. ಲಿಖಿತ ಅರ್ಜಿ / Helpline ಮೂಲಕ ದೂರುಸಣ್ಣ ತಾಂತ್ರಿಕ ದೋಷ ಅಥವಾ ದಾಖಲೆ ಸಮಸ್ಯೆ ಇದ್ದರೂ ಪರಿಹಾರ ವಿಳಂಬವಾಗಬಹುದು; ಸ್ವಲ್ಪ ಧೈರ್ಯದಿಂದ ನಿರೀಕ್ಷೆ ಮಾಡಬೇಕು
ಹಣ ಬಂದಿದೆಯೇ ತಿಳಿಯುವ ವಿಧಾನSMS / ಮಿಸ್ಡ್ ಕಾಲ್ / *99# / UPI / ಬ್ಯಾಂಕ್ ಆಪ್ / ಅಧಿಕೃತ ವೆಬ್ಸೈಟ್ಮೊಬೈಲ್ ಮೂಲಕ ತಕ್ಷಣ ಪರಿಶೀಲನೆ ಸಾಧ್ಯ; ATM / ಬ್ಯಾಂಕ್ ಸಹಾಯಕರಿಂದ ಖಚಿತಪಡಿಸಿಕೊಳ್ಳಬಹುದು
ಸಾರ್ವಜನಿಕ ಸಂದೇಶಗಾಬರಿಯಾಗಬೇಡಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿಸರ್ಕಾರ ರೈತರ ಜೊತೆಗೆ ನಿಂತಿದೆ; ಪರಿಹಾರ ಖಂಡಿತವಾಗಿ ಸಿಗಲಿದೆ; ಧೈರ್ಯ ಇಟ್ಟು ಕಾಯಿರಿ

ಪರಿಹಾಯ (Parihara Payment) ಪಡೆಯದ ರೈತರು ಮೊದಲು ಈ ಕೆಲಸ ಮಾಡಿ :-

  • ಖಾರಿಫ್ ಬೆಳೆ ಪರಿಹಾರದ ಹಣ ನಮಗೆ ಬರಲಿಲ್ಲವೆಂದು ಆತಂಕ ಪಡಬೇಡಿ. ಸರ್ಕಾರ ಅಧಿಕೃತ ಸುದ್ದಿಗೋಷ್ಠಿಯಲ್ಲಿ ಹಣ ವರ್ಗಾವಣೆ ತಾತ್ಕಾಲಿಕವಾಗಿ ನಿಂತಿದೆ ಎಂದು ಸ್ಪಷ್ಟ ಪಡಿಸಲಾಗಿದೆ ಇದು ಶಾಶ್ವತ ರದ್ದಲ್ಲ ಹೀಗಾಗಿ ಗಾಬರಿಯಾಗದೆ, ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಇಂದು ತಿಳಿಸಿದ್ದಾರೆ.
  • ರೈತರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್, ಆಧಾರ್ ಲಿಂಕ್, ಬೆಳೆ ವಿಮೆ ಅರ್ಜಿ ಸಂಖ್ಯೆ ಸರಿಯಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಸಣ್ಣ ತಾಂತ್ರಿಕ ದೋಷಗಳಿದ್ದರೂ ಹಣ ತಡೆಹಿಡಿಯಲಾಗಿರಬಹುದು.
  • ಗ್ರಾಮದ ಕೃಷಿ ಸಹಾಯಕ, ತಾಲ್ಲೂಕು ಕೃಷಿ ಅಧಿಕಾರಿ ಅಥವಾ ಸಂಬಂಧಿಸಿದ ಬೆಳೆ ವಿಮೆ ಕಂಪನಿಯ ಕಚೇರಿಗೆ ಭೇಟಿ ನೀಡಿ. ನಿಮ್ಮ ಹೆಸರು ಬಾಕಿ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಖಾತೆಗೆ ಯಾವುದೇ ತಡೆ (freeze), KYC ಅಪ್‌ಡೇಟ್ ಸಮಸ್ಯೆ ಇದೆಯೇ ಎಂದು ಬ್ಯಾಂಕ್‌ನಲ್ಲಿ ವಿಚಾರಿಸಿ. ಬ್ಯಾಂಕ್ ಸಮಸ್ಯೆಯಿಂದಲೂ ಹಣ ಜಮೆಯಾಗದೇ ಇರಬಹುದು.
  • ಹಣ ಇನ್ನೂ ಜಮೆಯಾಗದೇ ಇದ್ದರೆ, ತಾಲ್ಲೂಕು ಕಚೇರಿಯಲ್ಲಿ ಲಿಖಿತ ಅರ್ಜಿ, ಬೆಳೆ ವಿಮೆ ಸಹಾಯವಾಣಿ (Helpline) ಇವುಗಳ ಮೂಲಕ ಅಧಿಕೃತ ದೂರು ದಾಖಲಿಸಿ. ಇದು ಮುಂದಿನ ಹಂತದಲ್ಲಿ ಬಹಳ ಉಪಯೋಗವಾಗುತ್ತದೆ.
  • ಸುಳ್ಳು ಸುದ್ದಿ, ಊಹಾಪೋಹಗಳನ್ನು ಹಂಚದೇ, ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಿ. ಒಟ್ಟಾಗಿ ಶಾಂತಿಯುತವಾಗಿ ಬೇಡಿಕೆ ಇಟ್ಟರೆ ಪರಿಹಾರ ಶೀಘ್ರ ಸಿಗುವ ಸಾಧ್ಯತೆ ಹೆಚ್ಚು.
  • ಸರ್ಕಾರವು ಬಾಕಿ ಉಳಿದ ಎಲ್ಲಾ ರೈತರಿಗೂ ಬೆಳೆ ವಿಮೆ ಪರಿಹಾರದ ಹಣವನ್ನು(Parihara Payment) ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಭರವಸೆ ನೀಡಿದೆ. ಹೀಗಾಗಿ ರೈತ ಮಿತ್ರರು ಧೈರ್ಯವಾಗಿ, ಮೇಲ್ಕಂಡ ಕ್ರಮಗಳನ್ನು ಅನುಸರಿಸಬೇಕು.

ಸರ್ಕಾರದ ಭರವಸೆ ರೈತರು ತಿಳಿಯಲೇ ಬೇಕು :-

2025–26ನೇ ಸಾಲಿನ ಖಾರಿಫ್ ಹಂಗಾಮಿನ ಬೆಳೆ ವಿಮೆ ಪರಿಹಾರದ ಹಣವನ್ನು (Parihara Payment) ಸರ್ಕಾರ ರದ್ದು ಮಾಡಿಲ್ಲ, ಕೇವಲ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ತಾತ್ಕಾಲಿಕವಾಗಿ ಹಣ ವರ್ಗಾವಣೆ ಪ್ರಕ್ರಿಯೆ ನಿಂತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸುಮಾರು 2000 ರೈತರಿಗೆ ಇನ್ನೂ ಹಣ ಜಮೆಯಾಗದೇ ಇದ್ದರೂ, ಎಲ್ಲಾ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಹಣ ಖಂಡಿತವಾಗಿ ನೀಡಲಾಗುತ್ತದೆ ಎಂಬ ಭರವಸೆ ಸರ್ಕಾರ ನೀಡಿದೆ.

Parihara Payment

ತಾಂತ್ರಿಕ ದೋಷಗಳನ್ನು ಸರಿಪಡಿಸಿದ ತಕ್ಷಣವೇ ಬಾಕಿ ಉಳಿದ ರೈತರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಪುನರಾರಂಭಿಸಲಾಗುತ್ತದೆ (Parihara Payment)ಎಂದು ತಿಳಿಸಲಾಗಿದೆ. ಈ ವಿಷಯವಾಗಿ ರೈತರು ಗಾಬರಿಯಾಗುವ ಅಗತ್ಯವಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ಸರ್ಕಾರ ಮನವಿ ಮಾಡಿದೆ. ಯಾರಿಗಾದರೂ ಇನ್ನೂ ಹಣ ಬಂದಿಲ್ಲದಿದ್ದರೆ, ಕೃಷಿ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೂಲಕ ದೂರು ದಾಖಲಿಸಲು ಅವಕಾಶವಿದ್ದು, ಸರ್ಕಾರ ರೈತರ ಸಮಸ್ಯೆಗೆ ಸಂಪೂರ್ಣವಾಗಿ ಸ್ಪಂದಿಸಿ ಅನ್ನದಾತರ ಜೊತೆ ನಿಂತಿದೆ ಎಂಬ ಭರವಸೆ ನೀಡಿದೆ.

ರೈತರು ಖಾರಿಫ್ ಹಂಗಾಮಿನ ಪರಿಹಾರದ ಹಣ ಬಡಿದೆಯೋ ಇಲ್ಲವೋ ಫೋನ್ ನಲ್ಲಿ ಚೆಕ್ ಮಾಡಿ:-

ಪ್ರತಿಯೊಬ್ಬ ರೈತರು ಈ ಬೆಳೆ ಪರಿಹಾರದ ಹಣವನ್ನು (Parihara Payment0ಚೆಕ್ ಮಾಡಲು ಬ್ಯಾಂಕ್ ಶಾಖೆಗೆ ಹೋಗಿ ಬರಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಂತವರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಕೆಳಗೆ ತಿಳಿಸುವ ವಿಧಾನದ ಮೂಲಕ ಸರಳವಾಗಿ ಹಣ ಬಂದಿದೆಯೋ ? ಇಲ್ಲವೋ ? ಎಂದು ಪರಿಶೀಲನೆ ಮಾಡಬಹುದು.

  • ಬದಲು ಕರ್ನಾಟಕ ಸರ್ಕಾರದ ಅಧಿಕೃತ (Karnataka Vele parihara status) ಪರಿಹಾರ ವೆಬ್ಸೈಟ್ ಗೆ ಭೇಟಿ ನೀಡಿ.
  • ಇಲ್ಲಿ ಕಾಣುವ ಸಿಟಿಜನ್ ಲಾಗಿನ್ (citizen login) ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಹಾಕಿ OTP ಮೂಲಕ ಲಾಗಿನ್ ಆಗಿ.
  • ಒಂದು ವೇಳೆ ಲಾಗಿನ್ ಆಗುವ ಈ ಕೆ ವೈ ಸಿ ಆಗಿಲ್ಲ ಎಂಬ ಸಂದೇಶ ಬಂದರೆ, ನಿಮ್ಮ ಆಧಾರ್ ನಂಬರ್ ಹಾಕಿ ಲಾಗಿನ್ ಆಗಬೇಕಾಗುತ್ತದೆ.
  • ಲಾಗಿನ್ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ನಿಮ್ಮ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಮತ್ತು ನಿಮ್ಮ ಹಳ್ಳಿಯಲ್ಲಿ ಯಾರಿಗೆ ಹಣ ಬಂದಿದೆ ಎಂಬ “ವಿಲೇಜ್ ವಿಸಿಟ್ ಲಿಸ್ಟ್” ಅನ್ನು ಸಹ ನೋಡಬಹುದು.

ಇನ್ನೂ ಅನುಮಾನ ಇದ್ದರೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿ

ಇಲ್ಲಿ ಗಮನಿಸಿ : ಈ ಲೇಖನವೂ ಮಾಹಿತಿಯ ಉದ್ದೇಶಕ್ಕಾಗಿ ಮಾತ್ರವಾಗಿದ್ದು ರೈತರು ಹೆಚ್ಚಿನ ನಿಖರ ಮಾಹಿತಿಗಾಗಿ ಸರ್ಕಾರದ ಅಧಿಕೃತ ಪರಿಹಾರ ಜಾಲತಾಣ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನ ಸಂಪರ್ಕಿಸಲು ಕೋರಿದೆ.

ನನ್ನ ಕೊನೆಯ ಮಾತು :-

ರೈತ ಮಿತ್ರರೆ, ಬೆಳೆ ವಿಮೆ ಪರಿಹಾರದ ಹಣ (Parihara Payment) ರದ್ದು ಆಗಿಲ್ಲ. ಇದು ಕೇವಲ ತಾತ್ಕಾಲಿಕ ವಿಳಂಬ ಮಾತ್ರ. ಸರ್ಕಾರ ಎಲ್ಲ ಅರ್ಹ ರೈತರಿಗೆ ಹಣ ತಲುಪಿಸುವ ಭರವಸೆ ನೀಡಿದೆ. ಗಾಬರಿಯಾಗಬೇಡಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ನಿಮ್ಮ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿ, ಹಣ ಬಂದಿಲ್ಲವೆಂದರೆ ಸಂಬಂಧಿಸಿದ ಕಚೇರಿಯಲ್ಲಿ ದೂರು ನೀಡಿ. ಅನ್ನದಾತರ ನ್ಯಾಯಕ್ಕಾಗಿ ಸರ್ಕಾರ ನಿಮ್ಮ ಜೊತೆಗೆ ನಿಂತಿದೆ. “ಸ್ವಲ್ಪ ಧೈರ್ಯ ಇಟ್ಟು ಕಾಯಿರಿ — ನಿಮ್ಮ ಹಕ್ಕಿನ ಹಣ ಖಂಡಿತ ನಿಮ್ಮ ಕೈ ಸೇರಲಿದೆ”.

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

Leave a Reply

Your email address will not be published. Required fields are marked *